ಬದಲಾಗುತ್ತಿರುವ ಪ್ರಪಂಚದಲ್ಲಿ ದಿನದಿಂದ ದಿನಕ್ಕೆ ಜನರ ಜೀವನ ಶೈಲಿಯು ಬದಲಾಗುತ್ತಿದೆ. ಕೆಲಸದ ಒತ್ತಡದಿಂದ ವಿಶ್ರಾಂತಿಯೂ ತೆಗೆದು ಕೊಳ್ಳಲು ಸಮಯವನ್ನು ಕೊಡಲಾಗಿತ್ತಿಲ್ಲ ಆ ಕಾರಣದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
ಕೆಲಸ ಮುಗಿದ ನಂತರ ಒಂದೆರಡು ಗಂಟೆಗಳ ಭೌದಿಕ ಪರಿಶ್ರಮ ದೈಹಿಕ ಶ್ರಮದ ಕೆಲಸ ಕೈಗೊಳ್ಳುವುದು ಬಹಳ ಒಳ್ಳೇದು. ಕೆಲಸ ಮಾಡುವ ವಾತಾವರಣ ಪ್ರಶಾಂತ ನಿರ್ಮಲ ಗಾಳಿ ಬೆಳಕು ಇರುವಂತಹ ಪರಿಸರದಲ್ಲಿರುವುದು ಉತ್ತಮ. ಆಗ ಕೆಸಲದ ದೈಹಿಕ ಮಾನಸಿಕ ಆಯಾಸ ಮಾನವನನ್ನು ಅಷ್ಟಾಗಿ ಕಾಡುವುದಿಲ್ಲ.ಇಡೀ ದಿನ ಭೌದಿಕ ಕೆಲಸ ನೆಡೆಸಿದರೆ ಸಾಯಂಕಾಲ ಬಿರುಸಾದ ಆಟೋಟ, ವ್ಯಾಯಾಮಗಳಿಂದ ದೇಹ ಬೆವರುವಂತದರೆ ಸುಯೋಗ್ಯ ವಿಶ್ರಾಂತಿ ದೊರಕುತ್ತದೆ. ಅಂತಹ ವ್ಯಾಯಾಮದ ನಂತರ ಶವಾಸನದಂತಹ ಸಂಪೂರ್ಣ ಆರಾಮ ಮಾಡಿಕೊಳ್ಳಬೇಕು. ಆಗ ದೇಹದ ಎಲ್ಲ ಅವಯವಗಳಿಗೂ ಪುನಸಚೇತನ ತುಂಬಿದಂತಾಗುತ್ತದೆ.
ಇದಲ್ಲದೆ ವರ್ಷದ 10-11 ತಿಂಗಳು ಎಡಬಿಡದೆ ಕೆಲಸದ ನಂತರ ಒಂದು ತಿಂಗಳ ಕಾಲ ದೂರದ ಊರಿನಲ್ಲಿ ವಿಶ್ರಾಂತಿ, ಆರಾಮ ಜೀವನ, ಬೆಟ್ಟಗಾಡಿನ ವಿಶ್ರಾಂತಿಧಾಮಗಳಲ್ಲಿ ತಿರುಗಾಟ ಮುಂತಾದವುಗಳಲ್ಲಿ ಆಸಕ್ತಿ ತೋರುವುದುಉತ್ತಮ ಇವು ಮಾನವನ ದೇಹ ಮನಸ್ಸುಗಳ ಚೈತನ್ಯವನ್ನು ಉಲ್ಲಾಸ ಗೊಳ್ಳಲು ಸಹಾಯವಾಗುತ್ತದೆ. ಸಾಂಪಾತ್ತಿಕವಾಗಿ ಮುಂದುವರಿದ ಪಶ್ಚಾತ್ಯ ದೇಶಗಳ ಬುದ್ದಿಜೀವಿಗಳು, ವಾರದಲ್ಲಿ 5 ದಿನಗಳಲ್ಲಿ ಅವಿರತ ಪರಿಶ್ರಮ, ವಾರoತ್ಯದ ಎರಡು ದಿನಗಳಲ್ಲಿ ಹೊರ ಊರುಗಳಿಗೆ ಪ್ರಯಾಣ ಬೆಳೆಸಿ ಆರಾಮ ಜೀವನ ನೆಡೆಸುತ್ತಾರೆ.
ವರ್ಷಾತ್ಯoದಲ್ಲಿ ಹೊರದೇಶಗಳಿಗೆ ಹೋಗಿ ಅಲ್ಲಿ ವಿಶ್ರಾಂತಿ ಧಾಮಗಳಲ್ಲಿ ನವಚೈತನ್ಯ ಪಡೆದುಬರುತ್ತಾರೆ.
ಇವೆಲ್ಲ ಆ ದೇಶಗಳ ಹೆಚ್ಚಿನವರೆಲ್ಲರೂ ನೆಡೆಸುವ ಸಾಮಾನ್ಯ ಜೀವನ ಮಾರ್ಗವಾಗಿದೆ. ಹಾಗಾಗಿ ಅಲ್ಲಲ್ಲಿ ಜನರು ಕೆಲಸದಲ್ಲಿ ಸಮರ್ಥರು ಒಳ್ಳೆಯ ಅರೋಗ್ಯ ಶಾಲಿಗಳು ಆಗಿ ಬಾಳುತ್ತಾರೆ. ದೇಶವು ಎಲ್ಲ ತರಹದ ಮುಂದೆ ಬರುತ್ತಿದೆ.
Leave a Reply