ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಒತ್ತಡದಿಂದ ಸೋತ ದೇಹ ಮನಸ್ಸುಗಳ ಪುನಃರುಜ್ಜಿವನಕ್ಕೆ ನಿದ್ರೆ ಅತಿ ಮುಖ್ಯ.
ಸರಿಯಾಗಿ ನಿದ್ದೆ ಮಾಡುವವನಿಗೆ ಅರೋಗ್ಯ ವೃದ್ಧಿಯಾಗಿರುತ್ತೆ. ದೇಹ ಮತ್ತು ಮನಸ್ಸಿಗೆ ಕೆಲಸ ಕೊಟ್ಟರೆ ರಾತ್ರಿ ಒಳ್ಳೆಯ ನಿದ್ರೆ ಬರುತ್ತದೆ. ಸೋಮಾರಿಗಳಿಗೆ ಇವೆರಡು ದುರ್ಬಲ ವಾಗಿರುತ್ತೆ.
ಸದಾ ಕೆಲಸದಲ್ಲಿ ತೊಡಗಿರುವ ಮಾನವನ ಮೆದುಳು ಯಾವಾಗಲು ಚುರುಕಾಗಿ ಇರುತ್ತದೆ ಮತ್ತು ನರವ್ಯೂಹಗಳೆಲ್ಲ ಸಂಪೂರ್ಣ ವಿಶ್ರಾಂತಿ ದೊರಕುತ್ತದೆ. ಆದರೆ ನಿದ್ರೆಯಲ್ಲಿ ಕನಸು ಕಾಣುತ್ತಿದ್ದರೆ, ಮೆದುಳು ಯಾವಾಗಲು ಜಾಗೃತಿಯಾಗಿರುತ್ತೆ. ಅದರಿಂದ ಸರಿಯಾದ ವಿಶ್ರಾಂತಿಗೆ ಅಡ್ಡಿ ಬರುತ್ತದೆ. ಎಲ್ಲವನ್ನು ಮರೆತು ನಿಶ್ಚಿoತ ಮನಸ್ಸಿಂದ ಮಲಗಿದರೆ ಹೆಚ್ಚಾಗಿ ಕನಸು ಬರುವುದಿಲ್ಲ. ಇದೆ ತರ ಕನಸು ರಹಿತವಾದ ಗಾಢ ನಿದ್ರೆ ಎಂಬುದು ದೇಹ ಮನಸ್ಸುಗಳ ಎಲ್ಲ ಆಯಾಸನಿವಾರಕವಾದ ವರ ಪ್ರಧಾನವಾಗಿದೆ.
:ಒಳ್ಳೆಯ ನಿದ್ರೆಗೆ ಕೆಲವು ಸೂತ್ರಗಳು
1) ದಿನದಲ್ಲಿ ದೇಹ ಮತ್ತು ಮನಸ್ಸುಗಳು, ತೀರ ದಣಿದ್ದಿದರೆ ತನ್ನಷ್ಟಕ್ಕೆ ನಿದ್ರೆ ಬರುತ್ತದೆ.
2) ಒಳ್ಳೆಯ ವಾಯುಸಂಚಾರವಿರುವ ನಿಶ್ಯಬ್ದ ಕೋಣೆಯಲ್ಲಿ ಸರಿಯಾದ ಹಾಸಿಗೆ, ಹೊದಿಕೆ, ಇದ್ದಾರೆ ಒಳ್ಳೆಯ ನಿದ್ರೆ ಬರುತ್ತದೆ.
3) ಊಟ ಮಾಡಿದ ಮೇಲೆ 1 ಗಂಟೆ ಯಾದರು ವಾಯುವಿಹಾರ ಮಾಡಿ ಮಲಗಿದರೆ ಚನ್ನಾಗಿ ನಿದ್ರೆ ಬರುತ್ತದೆ
4) ನಿರ್ಮಲ ಮತ್ತು ಸಡಿಲ ಬಟ್ಟೆ, ಪ್ರಸಂತ ಮನೋಭಾವ, ದೇವರ ಧ್ಯಾನ ಇವೆಲ್ಲ ಉತ್ತಮ ನಿದ್ರೆಗೆ ಜಾರಲು ಸಹಾಯ ಮಾಡುತ್ತದೆ.
ಹಾಗೆ ನಿದ್ರೆ ಆರಂಭವಾದ ಸಣ್ಣ ನಿದ್ದೆಯಿಂದ ಗಾಢ ನಿದ್ರೆಗೆ ಮಾನವ ಸೇರುತ್ತಾನೆ.
ಸಾಮಾನ್ಯ ಮಾನವನಿಗೆ ದಿನಕ್ಕೆ ಎಳೆoಟು ಗಂಟೆಗಳ ನಿದ್ರೆ ಬೇಕಾಗುತ್ತದೆ.
ಮಕ್ಕಳಿಗೆ ಮತ್ತು ರೋಗಸ್ತರಿಗೆ ಇನ್ನಷ್ಟು ಹೆಚ್ಚಿನ ನಿದ್ರೆಯ ಅವಶ್ಯಕತೆ ಇದೆ. ಮದ್ಯಾನ ಆಹಾರದ ನಂತರ ಅರ್ಧ ಗಂಟೆಯ ಕಿರುನಿದ್ರೆ ಅರೋಗ್ಯ ವೃದ್ಧಿಗೆ ತುಂಬಾ ಸಹಾಯವಾಗುತ್ತದೆ.
: ನಿದ್ರೆ ಸರಿಯಾಗಿ ಬರದಿರಲು ಕೆಲವು ಕಾರಣಗಳು
ಮಿತಿ ಮೀರಿದ ಕಾಫಿ, ಟೀ, ಧೂಮಾಪನ, ಮದ್ಯಪಾನ ಇವೆಲ್ಲ ನಿದ್ರೆ ನಾಶ ಪಡಿಸುತ್ತದೆ. ಇನ್ನು ಕೆಲವರು ಶೀಘ್ರ ನಿದ್ರೇಗಾಗಿ ನಿದ್ರೆ ಗುಳಿಗೆಗಳನ್ನು ನುಂಗುತ್ತಾರೆ. ಆದರೆ ಇದು ಕ್ರಮೇಣ ದುರಭ್ಯಾಸಕ್ಕಿಳಿದು ಮತ್ತೆ ಮಾತ್ರೆ ಇಲ್ಲದೆ ನಿದ್ರೆ ಬಾರದ ಪರಿಸ್ಥಿತಿಗೆ ತಲುಪುತ್ತಾರೆ. ಅಂತಹ ಮಾತ್ರೆಗಳೂ ನರವ್ಯೂಹಗಳ ಮೇಲು ದುಷ್ಟಪರಿಣಾಮ ಬೀರುತ್ತವೆ. ಈ ಮೂಲಕ ಪರಿಪೂರ್ಣ ವಿಶ್ರಾಂತಿ ದೇಹ ಮನಸ್ಸು ಗಳಿಗೆ ಒದಗಿ ಬರುವಂತೆ ನೋಡಿಕೊಳ್ಳುವುದು ಒಳ್ಳೇದು.
Leave a Reply