ಚರ್ಮದ ಕಾಂತಿ ಹೆಚ್ಚಿಸಲು ಅನುಸರಿಸಬೇಕಾದ ಅಂಶಗಳು

   

         ಪುರತನ ಕಾಲದಿಂದಲೂ ಮಾನವನು ಚರ್ಮದ ಸೌಂದರ್ಯಕ್ಕೆ ಮಹತ್ವ ನೀಡುತ್ತಲೇ ಬಂದಿದ್ದಾರೆ. ಆದರೆ ಈಗಿನ ಕಾಲದಲ್ಲಿ ಅದು ಒಂದು ಪ್ಯಾಶನ್ ಆಗಿ ಬದಲಾಗಿದೆ ಚರ್ಮವು ಕಪ್ಪು, ಕಂದು, ಬಿಳಿ, ವಿವಿಧ ಬಣ್ಣಗಳನ್ನು ಹೊಂದಿದೆ.

         ಚರ್ಮ ಸೌಂದರ್ಯ ಸಾಧನೆಗೆ ಹಾಗೂ ಸಾರ್ವoಗ ಅರೋಗ್ಯ ಪಾಲನೆಗಾಗಿ ಆಯುರ್ವೇದ ಶಾಸ್ತ್ರದಲ್ಲಿ ಅಭ್ಯಾoಗಸ್ಥಾನಕ್ಕೆ ತುಂಬಾ ಮಹತ್ವ ಕೊಡಲಾಗಿದೆ. ಮೈ ಚರ್ಮದ ಸೊಬಗು ಮತ್ತು ಪ್ರಸನ್ನ ಮುಖಭಾವ ಮಾನವನ ದೇಹ ಮನಸ್ಸುಗಳ ಅರೋಗ್ಯದ ದ್ಯೋತಕವಾಗಿದೆ. ಚರ್ಮದ ಸೊಬಗು ಸುಂದರವಾಗಿ ಕಾಣಲು ‘”ಸೋಪು’”ಲೇಪನಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. ಒಳ್ಳೆಯ ಆಹಾರ, ಪ್ರಶಾಂತ ಮನಸ್ಥಿತಿ, ನಿರ್ಮಲ ವಾತಾವರಣ, ಯೋಗ, ವ್ಯಾಯಾಮ, ಇವುಗಳು ನಿಮ್ಮ ಚರ್ಮವನ್ನು ಸುಂದರಗೊಳಿಸಲು ಪ್ರಮುಖ ಪಾತ್ರ ವಹಿಸುತ್ತದೆ, ನಿಮ್ಮ ಚರ್ಮವು ಕಂಗೊಳಿಸುವಂತೆ ಮಾಡುತ್ತದೆ. ಮುಖದಲ್ಲಿ ವೃದ್ಧಪ್ಯಾ ಸೂಚಕವಾದ ನೆರಿಗೆ ತುಂಬಿದ ಒಣ ಚರ್ಮ ತೋರಿ ಬರುವುದಿಲ್ಲ.

       

       ದ್ವೇಷ, ಅಸೂಯೆ,ಸಾಧನೆಯಿಂದಗಿ ದುರುಗುಟ್ಟುವ ಮುಖಭಾವ, ಮಿತಿಮೀರಿದ ಕಾಮ ಮೋಹಗಳಿಂದಗಿ ಸೋತು ಸುಕ್ಕು ಗಟ್ಟಿದ ಮುಖಚರ್ಮ ಊಟಮಾಡಿದ್ದೂ ಜೀರ್ಣವಾಗದೆ ಬೆಳೆದು ಬಂದ ಹೊಟ್ಟೆ, ದೂರಭ್ಯಾಸದಿಂದ ಸರಿಯಾಗಿ ನಿದ್ರೆ ಮಾಡದಿರುವುದು, ಮತ್ತು ನರ ದೌರ್ಬಲ್ಯ, ಇವೆಲ್ಲ ಚರ್ಮವನ್ನು ಅದರಲ್ಲೂ ವಿಶೇಷವಾಗಿ ಮುಖಭಾವವನ್ನು ಹಾಳು ಮಾಡಿ ವ್ಯಕ್ತಿತ್ವವನ್ನೇ ಕುಗ್ಗಿಸುತ್ತದೆ.  

        ಚರ್ಮವನ್ನು ಸದಾಕಾಲ ತೇಜಸ್ಸಿನಿಂದ ಇಡಲು ಪ್ರಮುಖವಾಗಿ ಅನುಸರಿಸಬೇಕಾದ ಮಾರ್ಗಗಳು:

        ಬೆಳಗ್ಗಿನ ಅಥವಾ ಸಾಯಂಕಾಲ ಬಿಸಿಲಿಗೆ ಮೈ ಒಡ್ಡಿದರೆ ವಿಟಮಿನ್ “D” ದೇಹದೊಳಗೆ ಉತ್ಪಾದನೆಯಾಗಿ ಚರ್ಮ ಕಾಂತಿಗೊಳಿಸುತ್ತದೆ. ಮತ್ತು ಮೂಳೆ ಗಟ್ಟಿಯಾಗಿ ದೇಹ ಬಲಗೋಲ್ಲುತ್ತದೆ.
      ಸೌಂದರ್ಯ ಪಾಲನೆಗೆ ಸಕಲದಲ್ಲಿ ಒಳ್ಳೆಯ ಹಿತಮಿತ ಆಹಾರ ಸೇವನೆ ಬಹುಮುಖ್ಯವಾದುದು.
 
        

        
        ತಾಜಾ ಹಣ್ಣು, ತರಕಾರಿಯನ್ನು ಮತ್ತು ಆಯಾ ಕಾಲದಲ್ಲಿ ದೊರಕುವ ಹಣ್ಣುಗಳನ್ನು ಸೇವಿಸುವುದು ಒಂದು ಆಹಾರದಲ ಭಾಗವನ್ನಗಿಸಬೇಕು. ಕಡಲೆ, ಹೆಸರು, ಮುಂತಾದ ಧನ್ಯಗಳನ್ನು ಮೊಳಕೆ ಬರಿಸಿ, ಹಸಿ ತರಕಾರಿ ಅಥವಾ ಹಣ್ಣಿನೊಡನೆ ಸೇವಿಸುವ ಅಭ್ಯಾಸ ಮಾಡಿಕೊಂಡರೆ ತುಂಬಾ ಒಳ್ಳೇದು.
      ಹಸಿ ಕ್ಯಾರೆಟ್ ರಸ, ನಿಂಬೆ, ಕಿತ್ತಳೆ, ಮೋಸoಬಿ ಮುಂತಾದ ಹಣ್ಣುಗಳ ರಸ, ಜೇನು, ಮುಂತಾದವುಗಳ ಸೇವನೆಯು ಚರ್ಮ ಕಾಂತಿಯನ್ನು ಹೆಚ್ಚಿಸುತ್ತದೆ ಮುಖ ಕಾಂತಿಯನ್ನು ಹೆಚ್ಚಿಸಿ ತೇಜಸ್ವಿ ವ್ಯಕ್ತಿತ್ವ ಅರಳಿ ಉಳಿಯುವಂತೆ ಮಾಡುತ್ತದೆ.
       

Leave a Reply

Your email address will not be published. Required fields are marked *