ಮಾನವನ ಆಯುರ್ವೇದ ಮತ್ತು ಅರೋಗ್ಯ

 

  
       ಇಂದಿನ ವೈದ್ಯವಿಜ್ಞಾನಗಳ ಪ್ರಕಾರ ಮಾನವನಿಗೆ ರೋಗವಿಲ್ಲವೆಂದಾದರೆ ಆತ ಅರೋಗ್ಯವಂತ, ಆತನಿಗೆ ತನ್ನಷ್ಟಕ್ಕೆ ಶಕ್ತಿ ಬರುತ್ತದೆ. ಉತ್ತಮ ಆಹಾರ ಸೇವನೆಯಿಂದ ರೋಗವಿಲ್ಲದವನು ಸಮರ್ಥನಗುತ್ತಾನೆ. ವೈದ್ಯನು ರೋಗನಿವಾರಕ ಮಾಡಬಲ್ಲೆನಲ್ಲದೆ ಅದಕ್ಕಿಂತ ಹೆಚ್ಚಿನದೇವನನ್ನು ಮಾಡಲಾರ. ಅನುವಂಶಿಕ ದೇಹಸ್ಥಿತಿಗನುಗುಣವಾಗಿ ವ್ಯಕ್ತಿಯ ಶರೀರ, ಶಕ್ತಿ, ಸಮರ್ಥ, ಬಣ್ಣ, ಬುದ್ದಿ, ವಂತಿಕೆ ಮುಂತಾದುವೆಲ್ಲಾ ಮೊದಲೇ ನಿಶ್ಚತ ವಾಗಿರುತ್ತದೆ. ಆಹಾರ ಅಭ್ಯಾಸಗಳಿಂದ ಕೆಲಮಟ್ಟಿನ ಏರುಪೇರು ಮಾತ್ರ ನೆಡೆಯುತ್ತದೆ. ಇದೆಲ್ಲ ವ್ಯಕ್ತಿಯ ವಯಸ್ಸುನ್ನು ಹೊಂದಿಕೊಂಡಿದೆ ಎಂದು ಮೊದಲಾಗಿ ಹೇಳುತ್ತಾರೆ.
      
      

      
       ನಮ್ಮ ಪ್ರಾಚೀನ ಆಯುರ್ವೇದ ಶಾಸ್ತ್ರದ ಪ್ರಕಾರ, ತಕ್ಕ ಔಷದ ಉಪಚಾರಗಳಿಂದ ಸಮರ್ಥ ವೈದ್ಯನು ವ್ಯಕ್ತಿಯ ರೋಗನಿವಾರಣೆ ಮಾತ್ರ ಮಾಡುವುದಲ್ಲ, ಆತನ ಶಕ್ತಿ ಸಮರ್ಥಗಳನ್ನು ಹೆಚ್ಚಿಸಲು ಬಲ್ಲವನಾಗಿದ್ದಾನೆ. ವಯಸ್ಸಿಗೆ ಮೀರಿದ ದೈಹಿಕ, ಬೌದಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸಿ ಮುಂದುವರಿಯುವಂತೆ ಮಾಡಲು ಸಮರ್ಥನಗಿದ್ದಾನೆ. ಅಂತಹ ಸ್ವಸ್ಯತದ ಪ್ರಗತಿ ಸಾದಿಸಲಿರುವ ಔಷದೊಪಾಚಾರಕ್ಕೆ ರಾಸಾಯನಕ್ರಿಯೆ ಅಥವಾ ಕಾಯಕಲ್ಪ ಎಂದು ಹೇಳಿಲಾಗಿದೆ. 60-70 ವರ್ಷದ ವಯಸ್ಸು ದಾಟಿದವನು ನಡುವಯಸ್ಸಿನ ಯುವಕನoತೆ ಕೆಲಸಮಾಡಲು ಸಮರ್ಥನಾದರೆ ಅದಕ್ಕಿಂತ ಹೆಚ್ಚಿನ ವರದಾನ ಮತ್ತೇನು ಬೇಕು. ಇದರಿಂದ ವ್ಯಕ್ತಿ ಹಾಗೂ ಸಮಾಜಕ್ಕೆ ಹಿತವಲ್ಲವೇ, ದೀರ್ಘಯುಷ್ಯವೆಂದರೆ ಭೂಮಿಗೆ ಭಾರವಾಗಿ ನೂರು ವರ್ಷದವರೆಗೆ ಹಾಸಿಗೆಯಲ್ಲಿ ಮಲಗಿರುವುದಲ್ಲ. ತನ್ನ ಹಾಗೂ ಸುತ್ತಣ ಸಮಾಜದ ಕೆಲಸಗಳಲ್ಲಿ ಸಾಯುವವರೆಗೆ ಸಮರ್ಥ ರೀತಿಯಲ್ಲಿ ಪಾಲ್ಗೊಳ್ಳುವಂತಗಬೇಕು. ಇದು ಸಾಧ್ಯವೆಂದು ಆಯುರ್ವೇದದಲ್ಲಿ ಹೇಳಲಾಗಿದೆ.
 
    

     ಇದರೊಂದಿಗೆ ಮಾನವನ ಅರೋಗ್ಯ ಸಾಧನೆಗೆ ಪ್ರಾಚೀನ ಯೋಗ ಶಾಸ್ತ್ರದ ಕೊಡುಗೆಯೂ ಅಪಾರವಾಗಿದೆ. ಹೀಗೆ ಆಯುರ್ವೇದ ಮತ್ತು ಯೋಗಾಭ್ಯಾಸದ ಮೂಲಕ ದೇಹ ಮನಸ್ಸುಗಳ ರೋಗನಿವಾರಣೆ ಮಾತ್ರವಲ್ಲ ಸ್ವಸ್ತದ ಪ್ರಗತಿ ಸಾಧನೆಯು ಸಾಧ್ಯ. ಈ ಮೊದಲಾದ ತತ್ವಗಳನ್ನರಿತು ಕಾರ್ಯರೂಪಕ್ಕೆ ತಂದರೆ ಅದರಿಂದ ಸಮಾಜದ ಭವಿಷ್ಯ ಜೀವನ ಇನ್ನಷ್ಟು ಉಜ್ವಲವಾಗದೇ.

Leave a Reply

Your email address will not be published. Required fields are marked *