ರಾಜ್ಯದಲ್ಲಿ ಹೆಚ್ಚುತ್ತಿರುವ ನಾಯಿ ಕಡಿತ ಹಾವಳಿ 

              ರಾಜ್ಯದಲ್ಲಿ ಹೆಚ್ಚುತ್ತಿರುವ ನಾಯಿ ಕಡಿತ ಹಾವಳಿ

                        

 

                       ರಾಜ್ಯದಲ್ಲಿ ಹೆಚ್ಚುತ್ತಿರುವ ನಾಯಿಗಳ ಹಾವಳಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ .ಒಂದು ಅದ್ಯಾನದ ಪ್ರಕಾರ ಕಳೆದ 4-5 ವರ್ಷದಿಂದ ಸುಮಾರು 8 ಲಕ್ಷದ 12 ಸಾವಿರದ 412 ಪ್ರಕರಣ ಗಳು ಬೆಳಕಿಗೆ ಬಂದಿರುತ್ತವೆ .ಆರೋಗ್ಯ ಇಲಾಖೆಯು ನಾಯಿ ಕಡಿತವನ್ನು 2021 ರಲ್ಲಿ ಗೋಶೀತ ಕಾಯಿಲೆಯ ವ್ಯಾಪ್ತಿಗೆ ತಂದಿರುತ್ತದೆ .

                   ಬೀಸ್ ಅಥವಾ ಹುಚ್ಚು ನಾಯಿ ರೋಗಕ್ಕೆ ಒಳಗಾಗುವ ವ್ಯಕ್ತಿಗೆ ಬಹುತೇಕ ಸಾವು ಸಂಭವಿಸುತ್ತದೆ, ಹೀಗಾಗಿ ನಾಯಿ ಸೇರಿದಂತೆ ಯಾವುದೇ ಪ್ರಾಣಿಯ ಕಡಿತವನ್ನು ನಿರ್ಲಕ್ಷಿಸದೆ, ಸೂಕ್ತ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆರೋಗ್ಯ ಆದೀಕರಿಗಳು ಸಲಹೆ ನೀಡಿರುತ್ತಾರೆ . ರೇಬೀಸ್ ಒಂದು ಭಯಾನಕ ರೋಗವಾಗಿದ್ದು,  ಖ್ಯಾತ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರು ರೇಬೀಸ್ ನಿರೋಧಕ ಲಸಿಕೆಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದು, ಅವರನ್ನು ನಾವು ಸ್ಮರಿಸಬೇಕಿದೆ.  ರೇಬೀಸ್ ರೋಗದಿಂದ ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು 80  ಸಾವಿರ ಜನ ಸಾವನ್ನಪ್ಪುತ್ತಿದ್ದು, ವಿಪರ್ಯಾಸದ ಸಂಗತಿ ಎಂದರೆ, ಜಗತ್ತಿನಲ್ಲಿಯೇ ಭಾರತದಲ್ಲಿ ರೇಬೀಸ್ ರೋಗದ ಪ್ರಮಾಣ ಹೆಚ್ಚಾಗಿದೆ.  ನಮ್ಮ ಕರ್ನಾಟಕ ದಲ್ಲಿ ದಿನೇ ದಿನೇ ನಾಯಿ ಕಡಿತ ಪ್ರಕರಣ ಗಳು ಹೆಚ್ಚಾಗುತ್ತಿವೆ .

         

                                                                                            
                         ಕರ್ನಾಟಕದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು  ಬೆಂಗಳೂರು ಒಂದರಲ್ಲಿಯೇ ನಿತ್ಯ ಕನಿಷ್ಟ 110 ನಾಯಿ ಕಡಿತ ಸಂಭವಿಸುತ್ತಿದೆ.  ಐಟಿ, ಬಿಟಿ ನಲ್ಲಿ ಬೆಂಗಳೂರು ಮುಂದುವರೆದಿದರೂ, ನಾಯಿಯಿಂದ ಮಕ್ಕಳು, ವೃದ್ಧರ ಮೇಲೆ ನಾಯಿ ದಾಳಿ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು ವಿಷಾದಕರ ಸಂಗತಿಯಾಗಿದೆ.  ನಾಯಿ ಕಡಿತಕ್ಕೆ ಒಳಗಾದವರು ಬಹುತೇಕ ನಿರ್ಲಕ್ಷ್ಯ ತೋರುವುದು ಹೆಚ್ಚಾಗಿರುವುದರಿಂದ, ಮುಂದೆ ಅದು ರೇಬೀಸ್ ರೋಗಕ್ಕೆ ಕಾರಣವಾಗಲಿದೆ ಎಂದು ಹೇಳಿದರು
   
                           ರೇಬೀಸ್ ವೈರಸ್ ನಾಯಿ ಕಡಿತದ ಮೂಲಕ ಮನುಷ್ಯನ ದೇಹ ಪ್ರವೇಶಿಸಿದರೂ, ವರ್ಷಗಟ್ಟಲೆ ದೇಹದೊಳಗೆ ಬದುಕಿರುತ್ತದೆ.  ಹೀಗಾಗಿ ಯಾವ ಸಂದರ್ಭದಲ್ಲಿ ಅದು ತನ್ನ ಲಕ್ಷಣಗಳನ್ನು ತೋರಲಾರಂಭಿಸುತ್ತದೆ ಎಂದು ನಿಖರವಾಗಿ ಹೇಳಲು ಕಷ್ಟಸಾಧ್ಯ ಎಂದರು
        

                 ; ನಾಯಿ ಕಡಿದ ಮೇಲೆ ಮೊದಲು ನಾವು ಮಾಡಬೇಕಾದ ಕರ್ತವ್ಯಗಳು ;;;

 
            1 )  ಯಾವುದೇ ನಾಯಿ ಕಡಿತವನ್ನು ಯಾರೂ ನಿರ್ಲಕ್ಷಿಸದೆ, ನಾಯಿ ಕಡಿದ ತಕ್ಷಣ, ಕನಿಷ್ಟ 10 ನಿಮಿಷಗಳ ಕಾಲ ನೀರು ಹಾಗೂ ಸೋಪಿನಿಂದ ನಿರಂತರವಾಗಿ ಆ ಭಾಗವನ್ನು ತೊಳೆಯಬೇಕು.
 
             2)   ಬಳಿಕ ಆಸ್ಪತ್ರೆಗೆ ತೆರಳಿ ರೇಬೀಸ್ ನಿರೋಧಕ ಲಸಿಕೆಯನ್ನು ಹಾಕಿಸಿಕೊಳ್ಳಲೇಬೇಕು.
 
            3)   ಸಾಕು ನಾಯಿಗಳಿಗೂ ಸಹ ತಪ್ಪದೆ ಕಾಲಕಾಲಕ್ಕೆ ಲಸಿಕೆಯನ್ನು ಹಾಕಿಸಬೇಕು.
 
            4)    ಪ್ರಾಣಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಚಿಕಿತ್ಸೆ ಕೊಡಿಸುವುದನ್ನು ಮರೆಯಬಾರದು.
 
            5)    ನಾವು ಸಾಕುವ ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.   
 
 
                             

 

                                                         ;  ಕ್ರಮಗಳು

 
              ;  ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. 
 
              ;  ಅಲ್ಲದೆ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಿಸಲು ಮುಂದಾಗಬೇಕು.
 
               ;  ಜಿಲ್ಲೆಯಲ್ಲಿ ನಾಯಿಗಳನ್ನು ಸಾಕಿದವರು, ತಪ್ಪದೆ ಕಾಲಕಾಲಕ್ಕೆ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಬೇಕು ಎಂದರು.
 
              ; ರೋಗ ಬಂದರೆ ಸಾವು ಖಚಿತ, ರೇಬೀಸ್ ರೋಗ ನಿರೋಧಕ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿಸ್ತೆ ಸಿಗುತ್ತದೆ.
 
             ; ಲಸಿಕೆಗೆ ಬಿಪಿಎಲ್ ನವರಿಗೆ ಉಚಿತವಾಗಿದ್ದರೆ, ಎಪಿಎಲ್ ನವರಿಗೆ 100 ರೂಲ ಶುಲ್ಕ ನಿಗದಿಪಡಿಸಲಾಗಿದೆ.
 
             ;  ತುರ್ತು ಅಗತ್ಯವಿದ್ದಲ್ಲಿ ಸ್ಥಳೀಯ ಆರೋಗ್ಯ ರಕ್ಷಾ ಸಮಿತಿಯಿಂದಲೇ ಖರೀದಿಗೆ ಆಸ್ಪತ್ರೆಗಳಿಗೆ ಅನುಮತಿ ನೀಡಲಾಗಿದೆ.  
     

Leave a Reply

Your email address will not be published. Required fields are marked *