ಮಾನವನು ತನ್ನ ಸಾದ್ವರ್ತನೆ ಮತ್ತು ಸತ್ಕಾರಯಗಳಿಂದ ತನ್ನ ಹಾಗೂ ಸಮಾಜದ ಪ್ರಗತಿಗೆ ದುಡಿಯಬೇಕು.ಹಾಗ ಮಾತ್ರ ಅವನ ಆರೋಗ್ಯದಲ್ಲಿ ಬದಲಾವಣೆ ಕಾಣಲು ಸಾಧ್ಯ ಮತ್ತು ಸುದೀರ್ಘ ಜೀವನವು ಸಾಧ್ಯ. ಒಳ್ಳೆಯ ಕೆಲಸದಿಂದ ಉತ್ತಮ ಜೀವನ ನೆಡೆಸಿಕೊಂಡು ಬರುವವನಿಗೆ ಅವನ ಕೆಲಸವೇ ಕೈಲಾಸದಂತೆ ಕಾಣುತ್ತದೆ. ಅದು ಬಿಟ್ಟು ದ್ವೇಷ, ಅಸೂಯೆ, ತುಂಬಿದ ಕ್ರೂರ, ಪ್ರವೃತ್ತಿ, ಮಿತಿ ಮೀರಿದ ಇಂದ್ರಿಯ ಸುಖ, ಮೋಹ, ಅಮಿತವಾದ ಹಣದ ದಾಹ ಮುಂತಾದ ಕೆಟ್ಟ ಅಲೋಚನೆಗಳು ಸಮಾಜಕ್ಕೆ ಮಾತ್ರ ಕೇಡನ್ನೋದಗಿಸದಲ್ಲದೆ ವ್ಯಕ್ತಿಯ ಪತನ ಹಾಗೂ ನಿದಾನಕ್ಕೂ ಕಾರಣವಗಬಹುದು.
ದೇಹ ಮನಸ್ಸುಗಳ ಅರೋಗ್ಯಕ್ಕೆ ಅವುಗಳ ಸದುಪಯೋಗ ಸಹಾಯಕ ವಾಗುತ್ತದೆ. ಕೈಕಾಲುಗಳಿಗೆ ಕೆಲಸವಿತ್ತಾಗ ಅವು ಗಟ್ಟಿಮುಟ್ಟಾಗಿರುತ್ತವೆ. ಬದಲಾಗಿ ಕೂತಲ್ಲೇ ತಿಂದು ತೇಗುತ್ತಿದ್ದಾರೆ ಹೊಟ್ಟೆ ಮಾತ್ರ ಬೆಳೆಯಬಲ್ಲುದಲ್ಲದೆ ಕೈಕಾಲುಗಳು ಬಳಗೊಳ್ಳುವುದಿಲ್ಲ. ದೇಹದ ಎಲ್ಲ ಅವಯವಾಗಳಿಗೂ ಶ್ರಮ ತರುವ ಕೆಲಸ ಕೊಡುತ್ತಿದ್ದರೆ ಅವೆಲ್ಲ ಸುಸ್ಥಿತಿಯಲ್ಲಿರುತ್ತವೆ. ಕೆಲಸ ಮಾಡುವುದು ಸಾಧ್ಯವಿಲ್ಲವಾದರೆ ವ್ಯಾಯಾಮ ಮಾಡಿಯಾದರೂ ಅವಯವಾಗಳನ್ನು ಬೆಚ್ಚಗಗಿಸಬೇಕು. ಸುಮ್ಮನೆ ಇರುವ ದೇಹoಗಗಳು ಮೂಲೆಯಲ್ಲಿ ಹಾಕಿದ ಕಬ್ಬಿಣದಂತೆ ತುಕ್ಕು ಇಡಿದು ಕರಗುತ್ತಿರುತ್ತವೆ. ಇದೆ ತರಹದಲ್ಲಿ ಮನೋಬುದ್ದಿಗಳಿಗೂ ಸಾಕಷ್ಟು ಕೆಲಸವನ್ನು ಒದಗಿಸುತ್ತಿರುವುದು ಒಳ್ಳೇದು. ಸುಮ್ಮನೆ ಬಿಟ್ಟು ಮೆದುಳು ಪೈಶಾಚಿಕ ದುರಾಲೋಚನೆಗಳ ಕುಮ್ಮಟವಾಗಬಹುದು. ಸಮಾಜಸೇವೆ, ದೇಶಸೇವೆ, ಪರೋಪಕಾರಿ, ಮುಂತಾದವು ಆತ್ಮ ಸಂತೃಪ್ತಿಯನ್ನೋದಾಗಿಸುತ್ತದೆ. ಅದರ ಪರಿಣಾಮ ಮಾನವನ ಮೆದುಳು ನರವ್ಯೂಹದ ಮೇಲು ಬೀಳುತ್ತದೆ. ”ದೇಶ ಸೇವೆಯೇ ಈಶಸೇವೆ ”ಎಂಬ ನುಡಿ ಅರ್ಥ ಗರ್ಭಿತ ವಾಗಿದೆ. ಈ ಮೂಲಕ ಒಳ್ಳೆಯ ಅರೋಗ್ಯ ಬೆಳೆದು ಬರುತ್ತದೆ.
ಕೈ ಗೊಂಡ ಕೆಲಸವನ್ನು ಶಿಸ್ತು ಬದ್ದವಾಗಿ ಒಂದು ತರಹದ ವೇಳೆ ಪಟ್ಟಿಗನುಗುಣವಾಗಿ ಮಾಡುತ್ತ ಹೋಗಬೇಕು. ಅದರಿಂದ ಕೆಲಸವೂ ಸುಲಭ ವಾಗುತ್ತದೆ. ಆರಂಭಿಸಿದ ಕೆಲಸವನ್ನು ನಿಶ್ಚತ ಸಮಯದಲ್ಲಿ ಮುಗಿಸಲು ಸಾಧ್ಯವಾಗುತ್ತದೆ. ಅದರಂತೆ ವ್ಯಯಕ್ತಿಕ ಆಹಾರ ವಿಹಾರಗಳಲ್ಲೂ ಶಿಸ್ತು, ಸಂಯಮ ಮತ್ತು ವೇಳಾಪಟ್ಟಿಗಾನುಗುಣವಾಗಿ ವರ್ತಿಸಿದರೆ ಮಾನಸಿಕ ಶಾಂತಿಯು ಒದಗಿಬರುತ್ತದೆ. ಹಾಕಿಕೊಂಡ ವೇಳಾಪಟ್ಟಿ ದೇಶ, ಕಾಲ, ವಯಸ್ಸು, ಹವಾಮಾನಗಳಿಗಾನುಗುಣವಾಗಿ ಬೇಕಾದಾಗ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಬಹುದು.
Leave a Reply