ನೆಗಡಿ, ಶೀತ, ತಲೆನೋವುಗಳಿಂದ ಒದ್ದಾಡುತ್ತಿರುವವರ ಸಂಖ್ಯೆ ಇಂದು ದಿನೇ ದಿನೇ ಇರುತ್ತಿದೆ. ಕೆಲವರಿಗೆ ದಿನವಿಡೀ ಮುಗಿನಿಂದ ನೀರು, ಸಿಂಬಳ ಸುರಿವ ಮತ್ತು ಪದೇ ಪದೇ ಸೀನುವ ತೊಂದರೆ ಇರಬಹುದು. ಮತ್ತೆ ಕೆಲವರಿಗೆ ಮೂಗು ಸರಿಯಾಗಿದ್ದರು ಅರೆ ತಲೆನೋವು ಅಥವಾ ಇಡೀ ತಲೆನೋವು ಪದೇ ಪದೇ ಕಾಡುತ್ತ ಜೀವನವೇ ಸಾಕಾಗಿ ಹೋಗುವಷ್ಟು ನೋವು ಕೊಡುತ್ತದೆ.
ಇವೆಲ್ಲ ತಾತ್ಕಾಲಿಕ ಶಾಮನ ಔಷದಿಗಳು,ತಲೆನೋವು ಔಷದಿ ಸೇವಿಸಿದ ಮೇಲೆ ಹೊಟ್ಟೆ ನೋವಿನ ತೊಂದರೆ ತೋರಲುಬಹುದು. ಹಾಗಾಗಿ ಕಾಯಿಲೆಯ ಮೂಲ ಕಾರಣ ತಿಳಿದು ಅದಕ್ಕೆ ಸರಿ ಹೋಗುವ ಔಷದಿ: ಪ್ರಾಣಾಯಾಮ, ಯೋಗಾಸನ, ಪತ್ಯಹಾರಗಳಿಂದ ಗುಣ ಪಡಿಸಬಹುದು.
ಮಿತಿಮೀರಿದ ನಗರಿಕರಣ ಮತ್ತು ಕೈಗಾರಿಕೆಗಳ ಪ್ರಸಾರದಿಂದಾಗಿ ಇಂದು ಶುದ್ಧಗಾಳಿ, ನೀರು, ಆಹಾರಗಳು ದುರ್ಬಲ ವಾಗುತ್ತಿವೆ.
ಕಾಡು, ಮರ, ಪಶುಪಕ್ಷಿಗಳ ಬೆಳವಣಿಗೆಯನ್ನು ಕುಗ್ಗಿಸಿ ಮಾನವನಿಗೆ ಬೇರೆ ಬೇರೆ ತರಹದ ತಲೆನೋವoನ್ನಟು ಮಾಡುತ್ತಿವೆ.ಇದಲ್ಲದೆ ದೊಡ್ಡ ದೊಡ್ಡ ಲಾರಿ, ಬಸ್ಸು, ಕಾರು, ದ್ವಿಚಕ್ರ, ತ್ರಿಚಕ್ರ, ವಾಹನಗಳು ಪೆಟ್ರೋಲ್ ಅಥವಾ ಡೀಸೆಲ್ನ ಹೊಗೆಯನ್ನು ಕಾರುತ್ತಾ ಮಹಾ ನಗರಗಳ ಪರಿಸರವನ್ನೇ ಮಿತಿಮೀರಿ ಮಲಿನಗೋಳಿಸುತ್ತಿವೆ. ಇದರಿಂದ ಜನ ಜೀವನ ತುಂಬಾ ಕಷ್ಟಕರವಾಗಿದೆ.
ಇವೆಲ್ಲ ಕಾರಣಗಳಿಂದ ಶೀತ, ತಲೆನೋವು ಹೆಚ್ಚಾಗ ತೊಡಗಿದೆ. ಇಂದಿನ ಮಾನವನ ಜೀವನ ಜಂಜಾಟ, ದ್ವೇಷ, ಅಸೂಯೆ, ಉದ್ವೆಗ, ಆವೇಶ, ಅವಸರ, ಮುಂತಾದವುಗಳಿಂದ ಉಂಟಾಗುವ ಮಾನಸಿಕ ಒತ್ತಡವೂ ತಲೆನೋವು ಉಂಟಾಗುತ್ತದೆ. ಅರೆ ತಲೆನೋವಿನಿಂದ ಕೆಲವರು ನರಳುತ್ತಿದ್ದಾರೆ. ಅದು ಸಂಜೆ ವೇಳೆ ಈ ತಲೆ ನೋವು ತುಂಬಾ ಅತಿಯಾಗಿ ಅವರಿಸುತ್ತದೆ. ಇದನ್ನು ಒತ್ತಡದ ತಲೆ ನೋವು ಎಂದು ಕರೆಯುತ್ತಾರೆ. ಮತ್ತೆ ಕೆಲವರಿಗೆ ಕಣ್ಣಿನ ದೋಷದಿಂದಲೂ ತಲೆ ನೋವು ಬರುತ್ತದೆ.
ಈ ನೋವಿನ ತಾತ್ಕಾಲಿಕ ಪರಿಹಾರಕ್ಕಾಗಿ ಧೂಮಾಪನ, ಮದ್ಯಪಾನ, ಗುಳಿಗೆಗಳ ಸೇವನೆ ಇತ್ಯಾದಿ ಗಳನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇದು ಪರಿಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸರಿಯಾದ ಟೈo ಗೆ ಆಹಾರ ಗಳನ್ನು ತೆಗೆದು ಕೊಳ್ಳದಿರುವುದು ಸಹ ತೊಂದರೆ ಕೊಡಬಹುದು.
Leave a Reply