ಇದು ಹೃದಯ ರೋಗಕ್ಕೆ ಸಂಬಂಧಪಟ್ಟ ಕಾಯಿಲೆ. ರಕ್ತ ಸಂಚಾರಕ್ಕಾಗಿ ಮಿತಿ ಮೀರಿದ ಒತ್ತಡವನ್ನು ಉತ್ಪದಿಸಬೇಕಾದ ಸಂದರ್ಭದಲ್ಲಿ ಹೃದಯ ಕ್ರಮೇಣ ಶಕ್ತಿ ಕಳೆದು ಕೊಳ್ಳುತ್ತದೆ. ಇದಕ್ಕೆ ಹೆಚ್ಚಿದ ರಕ್ತದೋತ್ತಡ ಕಾಯಿಲೆ ಎಂದು ಹೇಳುತ್ತಾರೆ.
ಮಾನವನು ಸೇವಿಸುವ ಆಹಾರದಲ್ಲಿ ಎಣ್ಣೆ, ತುಪ್ಪ, ಮುಂತಾದ ಕೊಬ್ಬಿನಅಂಶ ಹೆಚ್ಚಾಗಿದ್ದರೆ ಅದು ರಕ್ತಣಳಗಳಲ್ಲಿ ಶೇಖರಿಸುತ್ತದೆ. ಅದರಿಂದ ರಕ್ತ ವಾಹಿನಿಗಳ ಗಾತ್ರ ಕುಗ್ಗಿ ರಕ್ತ ಸಂಚಾರ ಸುಗಮ ಗೊಳ್ಳುವುದಿಲ್ಲ. ರಕ್ತವು ಅಲ್ಲಲ್ಲಿ ಗಟ್ಟಿಕಟ್ಟಿ ತಡೆಉಂಟಾಗುತ್ತದೆ.ಹೃದಯಕ್ಕೆ ರಕ್ತ ಸರಬರಾಜಗುವುದು ನಿಂತುಹೋದಾಗ ಎದೆಯ ಎಡಭಾಗದಲ್ಲಿ ವಿಪರೀತ ನೋವುಂಟಾಗುತ್ತದೆ. ಮೈಯಲ್ಲ ಬೆವರುತ್ತದೆ. ಹೆಚ್ಚಿದ ಒತ್ತಡದಿಂದಲೂ ರಕ್ತ ಸರಬಾರಾಜು ಹೃದಯಕ್ಕೆ ಆಗದಿದ್ದರೆ ಪ್ರಾಣಪಾಯವೂ ಬರಬಹುದು.
ಇದಕ್ಕೇನು ಕಾರಣ :
ರಕ್ತದೋತ್ತಡ ಕಾಯಿಲೆ ಅನುವಂಶಿಕ ಕಾರಣ ಮತ್ತು ವಾತಾವರಣದ ಪ್ರಭಾವ ಪ್ರಮುಖಪಾತ್ರವಹಿಸುತ್ತದೆ. ವ್ಯಕ್ತಿಯ ಹಿರಿಯರಲ್ಲಿ ಈ ಕಾಯಿಲೆ ಇದ್ದರೆ ಮಕ್ಕಳಿಗೆ ಅದು ಬರುವ ಸಂಭವ ಹೆಚ್ಚು. ಅದರೊಂದಿಗೆ ಎಳೆತನದಿಂದಲೇ ಮಾನಸಿಕ ಉದ್ವೆಗ, ಆವೇಶಮಯ ವಿಶ್ರಾಂತಿ ರಹಿತ ಜೀವನ ವಿಧಾನ, ಮತ್ತು ಮಿತಿಮೀರಿದ ಸಕ್ಕರೆ ಕೊಬ್ಬು ಮಿಶ್ರತ ಆಹಾರ ಸೇವನೆ ಇದ್ದರೆ ಈ ರೋಗ ಮದ್ಯ ವಯಸ್ಸಿನಲ್ಲೇ ಕಾಡತೊಡಗಬಹುದು. ಅದರೊಂದಿಗೆ ಧೂಮಪಾನ, ಮದ್ಯಪಾನಗಳೂ ಸೇರಿದರೆ ಇನ್ನಷ್ಟು ಹೆಚ್ಚಾಗ ಬಹುದು.
ಇದಕ್ಕೆ ಪರಿಹಾರ ಮಾರ್ಗ ಯಾವುದು? :
ರಕ್ತದೋತ್ತಡ ಹೆಚ್ಚಾಗಿದೆ ಎಂಬ ಸೂಚನೆ ಬಂದೊಡನೆ ಪರಿಹಾರ ವೈದ್ಯರನ್ನು ಸಂಪರ್ಕಿಸ ಬೇಕು. ಅವರ ಸಲಹೆಯಂತೆ ಔಷದ, ಲಗು ವ್ಯಾಯಾಮ, ಸರಿಹೋಗುವ ಯೋಗ, ನೆಡೆಸ ಬೇಕು.
ಹೆಚ್ಚಿದ ರಕ್ತದೋತ್ತಡ ಆರಂಭ ವ್ಯವಸ್ಥೆಯಲ್ಲಿದ್ದಾರೆ ಯೋಗ ಚಿಕಿತ್ಸೆ ಮತ್ತು ತಕ್ಕ ಆಹಾರವಿಹಾರಗಳಿಂದ ಗುಣ ಹೊಂದಲು ಸಾಧ್ಯವಿದೆ. ಈ ರೋಗಗ್ರಸ್ಥರು ಮೊತ್ತ ಮೊದಲು ಧೂಮಪಾನ ಮತ್ತು ಎಲ್ಲ ತರಹದ ತಂಬಾಕಿನ ಸೇವನೆಯನ್ನು ಮಿತಿಯಲ್ಲಿ ಇರಿಸಬೇಕು. ಸಂಪೂರ್ಣ ಬಿಟ್ಟರೆ ಒಳ್ಳೇದು, ಮತ್ತು ಟೀ, ಕಾಫಿ ಅಂತ ಸೇವನೆ ಇಂದ ನಿಯಂತ್ರಣದಲ್ಲಿ ಇರಬೇಕು.
ಎಣ್ಣೆ, ತುಪ್ಪ, ಮಾಂಸ, ಸಿಹಿ ತಿಂಡಿ, ಮುಂತಾದ ಕೊಬ್ಬು ತುಂಬಿದ ಆಹಾರ, ಬಿಟ್ಟು ಬಿಡಬೇಕು.
ಆಹಾರ ದಲ್ಲಿ ಖಾರ, ಹುಳಿ, ಗರಂ ಮಸಾಲಾ, ಮೊದಲಾದವುಗಳು ಕಡಿಮೆ ಪ್ರಮಾಣದಲ್ಲಿ ಇರಬೇಕು. ಅಂತೂ ಆಹಾರ ವಿಹಾರಗಳಲ್ಲಿ ಮಿತಿ ಹಾಗೂ ಶಿಸ್ತು ಇರುವುದು ಅವಶ್ಯ.
ಮಿತಿಮೀರಿದ ಮಾನಸಿಕ ಒತ್ತಡ, ಎಡಬಿಡದೆ ಭೌದಿಕ ಕಾರ್ಯ, ವಿಶ್ರಾಂತಿ, ನಿದ್ರೆಗಳ ವಿಚಾರದಲ್ಲಿ ಶಿಸ್ತಿನ ಅಭಾವ ಇವೆಲ್ಲ ಈ ರೋಗವನ್ನು ಹೆಚ್ಚಿಸಲು ಕಾರಣವಾಗುತ್ತದೆ.
ಚಿಂತೆ, ಕಿರಿ ಕಿರಿ, ಕಳವಳಗಳಿಗೆ ಗುರಿಯಗಬಾರದು. ಆದಷ್ಟು ಮಟ್ಟಿಗೆ ಜೀವನದ ಸಮಸ್ಯೆಗಳನ್ನು, ಬಗೆಹರಿಸಲು ಪ್ರಯತ್ನ ಪಡಬೇಕು.
ಇದೆ ಈ ಕಾಯಿಲೆಗೆ ಪ್ರಥಮ ಚಿಕಿತ್ಸೆ.
Leave a Reply