ಮಾನವನ ಜೀವನಕ್ಕೆ ಅತಿ ಮುಖ್ಯವಾದ ಪ್ರಾಣವಾಯು ಸೇವನೆಗೆ ತೊಂದರೆ ಉಂಟಾದಾಗ ಸಹಿಸಲಾಗದ ನೋವುಂಟಾಗುತ್ತದೆ ಅದನ್ನೇ “ಆಸ್ತಮ” ಎಂದು ಹೇಳುತ್ತಾರೆ. ಇದು ಪುರತನ ಕಾಯಿಲೆಯಾಗಿದ್ದು ಕೆಮ್ಮು, ಗಂಟಲು ನೋವು, ಮೇಲುಬ್ಬಸ ತಲೆದೋರುತ್ತದೆ.ಇದರಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಮಕ್ಕಳಿಂದ ಇಡಿದು ಎಲ್ಲ ವಯಸ್ಸಿನವರನ್ನು ಕಾಡುತ್ತದೆ.
ನೆಗಡಿ, ಶೀತ, ಕೆಮ್ಮುಗಳು, ಗಾಳಿ, ಮಳೆ, ಚಳಿ, ಮುಂತಾದ ಹವಾಮಾನ ವ್ಯತ್ಯಾಸ ದಿoದ ತಲೆಧೋರಬಹುದು. ಶ್ವಾಸ ಕೋಶದಲ್ಲಿ ಕಫ ತುಂಬಿ ಉಬ್ಬಸ ಬರಬಹುದು. ಶ್ವಾಸನಾಳದ ಗಾತ್ರ ಕುಗ್ಗಿ, ಕಫ, ಭಾದೆ, ಇಲ್ಲದೆಯೂ ಒಣಕೆಮ್ಮು ಮತ್ತು ಉಬ್ಬಸ ಕಾಡಬಹುದು. ಕೆಲವೆಲ್ಲ ವಾಸನೆ, ಬೇಸರ, ಜುಗುಪ್ಸೆ, ಧೂಳು ಮುಂತಾದ ಅಲರ್ಜಿ ಇವೆಲ್ಲ ಕಾರಣಗಳಿಂದ ಉಬ್ಬಸ ಬರಬಹುದು.ಈ ಕಾಯಿಲೆ ಹೆಚ್ಚಿನoಶ ಅನುವಂಶಿಕವಾಗಿ ಬರುತ್ತದೆ.
ಧೂಮಪಾನದಿಂದ ಹಾಗೂ ಪರಿಸರ ಮಾಲಿನ್ಯದಿಂದ ಇಂದಿನ ಮಾನವನ ಈ ರೋಗಕ್ಕೆ ತುತ್ತಗುವ ಸಂಭವ ಹೆಚ್ಚಾಗುತ್ತಿದೆ. ಮಹಾನಗರಗಳಲ್ಲಿ ಕೈಗಾರಿಕೆಗಳು ಉಗುಳುವ ಹೋಗೆ, ಪೆಟ್ರೋಲ್ ಚಾಲಿತ ವಾಹನಗಳು ಕಾರುವ ವಿಷಮಯ ಗಾಳಿ, ಜನನಿಬಿಡ ವಾತಾವರಣ ಇವೆಲ್ಲ ವಾಯುಮಾಲಿನ್ಯವನ್ನುoಟುಮಾಡಿ ಪರಿಶುದ್ಧ ಪ್ರಾಣವಯುವೇ ಜನರಿಗೆ ಸಿಗುತ್ತಿಲ್ಲ.ಉದ್ಯಾನವನ, ಮರ, ಕಾಡುಗಳಿಗೆಲ್ಲ ಜಾಗವೇ ಇಲ್ಲದ ಮಹಾನಗರಗಳ ಪರಿಸದಲ್ಲಿ ಶುದ್ಧ ಗಾಳಿಯೇ ಸಿಗದಾಗ ಜನ ಉಸಿರಾಟದ ಕಾಯಿಲೆಗಳಿಗೆ ಬಲಿಯಾಗುವುದು ಸ್ವಭಾವಿಕ.
ಇದಲ್ಲದೆ ಮಿತಿಮೀರಿದ ದ್ವೇಷ, ಅಸೂಯೆ, ಆವೇಶ, ಅಸಂತುಷ್ಟಿ, ಅದುವಿಟ್ಟು ಅಸೆ, ಆಕಾಂಕ್ಷೆ, ಮುಂತಾದ ಮಾನಸಿಕ ಕಾರಣಗಳು ಸಹ ಉಬ್ಬಸಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಮಾನಸಿಕ ಒತ್ತಡದಿಂದ ನರದೌರ್ಬಲ್ಯ ತೋರುತ್ತದೆ. ಶ್ವಶಕೋಶ, ಶ್ವಾಸನಳಗಳ ನರವ್ಯೂಹ ಕಾಲ ಕ್ರಮೇಣ ಶಕ್ತಿಯನ್ನು ಕಳೆದು ಕೊಳ್ಳುತ್ತದೆ.
Leave a Reply